ಪುಟಗಳು

Translate

ಗುರುವಾರ, ಜನವರಿ 16, 2025

ಕರುಣಾ ಸಲಗರ

`ಶಿವಲಿಂಗೇಶ್ವರ' ಎಂಬ ಅಂಕಿತನಾಮದಿAದ ಆಧುನಿಕ ವಚನಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಕರುಣಾ ಸಲಗರ. ಇವರು ಕಲಬುರಗಿ ಜಿಲ್ಲೆ ಕುರಿಕೋಟಾ ಗ್ರಾಮದ ಚನ್ನಬಸಪ್ಪ ಮತ್ತು ಹಿರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೬ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಶಿಕ್ಷಣ ಪಡೆದ ಇವರು ೧೯೮೯ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು `ಶಿವಲಿಂಗೇಶ್ವರ ವಚನಗಳು' (ಆಧುನಿಕ ವಚನ) `ಭಾವಧಾರೆ'. `ಕಾವ್ಯ ಕಿರಣ' (ಕವನ ಸಂಕಲನಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಂದ ಆದರ್ಶ ಶರಣ ಜೀವಿ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ಕಾವ್ಯಾಂಜಲಿ ಪ್ರಶಸ್ತಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ಕಾಯಕ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್, ದಲಿತ ಸಾಹಿತ್ಯ ಪರಿಷತ್ ಹಾಗೂ ಧರಿನಾಡು ಕನ್ನಡ ಸಂಘ, ಹುಮನಾಬಾದ್ ವತಿಯಿಂದ `ಕನ್ನಡ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ಮತ್ತು ದಾಸ ಸಾಹಿತ್ಯ ಪರಿಷತ್ ವತಿಯಿಂದ `ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಮತ್ತು ಹುಮನಾಬಾದನಲ್ಲಿ ೨೦೧೭ರಲ್ಲಿ ನಡೆದ ಪ್ರಥಮ ತಾಲೂಕು ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ ಬಸವ ಟಿ.ವಿ.ಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು ಬಸವ ಸೇವಾ ಪ್ರತಿಷ್ಠಾನದ ಸದಸ್ಯರಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದು ಸದ್ಯ ಹುಮನಾಬಾದನಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ