ಪುಟಗಳು

Translate

ಸೇಡಂ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೇಡಂ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜನವರಿ 16, 2025

ಲಿಂ.ಪೂಜ್ಯ. ಶ್ರೀ. ಸಿ.ಜಿ.ಸ್ವಾಮಿಗಳು

ಜ್ಯೋತಿಷಿ, ಕವಿ, ಕಲಾವಿದ, ಸಾಹಿತಿ ಮಠಾಧೀಶರೆಂದರೆ, ಪೂಜ್ಯ. ಶ್ರೀ. ಸಿ.ಜಿ.ಸ್ವಾಮಿಗಳು. ಇವರು ಮೂಲತಃ ಸೇಡಂ ತಾಲೂಕಿನ ದೇವನೂರಿನ ನರಸಪ್ಪ ಮತ್ತು ಯಂಕಮ್ಮ ದಂಪತಿಗಳಿಗೆ ದಿನಾಂಕ ೨೫-೧೦-೧೯೦೧ರಲ್ಲಿ ಜನಿಸಿದ್ದಾರೆ. ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಇವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೆಮಳಖೇಡದ ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿಗಳಾಗಿದ್ದರು. ಮತ್ತು ದಲಿತ ಜನರಿಗೆ ಲಿಂಗ ದೀಕ್ಷೆಯನ್ನು ನೀಡಿ ಶರಣ ಸಂಸ್ಕಾರವನ್ನು ನೀಡಿರುವ ಇವರು ಸಾಹಿತಿಗಳಾಗಿ `ರಾಜ ನೀತಿ,' ಮತ್ತು `ಭಕ್ತ ಮಾರ್ಕಂಡೇಯ' ಎಂಬ ನಾಟಕಗಳನ್ನು ರಚಿಸಿ ಅವುಗಳ ಪ್ರದರ್ಶನಕ್ಕೆ ನಿರ್ದೇಶನ ಮಾಡಿದ್ದಾರೆ. ಅಷ್ಟೇಯಲ್ಲದೆ ಹಲವಾರು ವಚನ, ತತ್ವಪದಗಳು ಬರೆದಿದ್ದಾರೆ. ಇವರು ಉತ್ತಮ ಸಂಗೀತಗಾರರು ಹಾಗೂ ಹಾರ್ಮೋನಿಯಂ ವಾದಕರಾಗಿದ್ದರಿಂದ ೨೦೦೧ರಲ್ಲಿ ಶ್ರೀಗಳಿಗೆ ತುಲಾಭಾರ ಮಾಡಿ ಅವರ ಕುರಿತಾದ ಕಿರು ಪರಿಚಯ ಪುಸ್ತಕವು ಪ್ರಕಟಿಸಲಾಗಿದೆ.