Translate
ಶಹಾಬಾದ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಶಹಾಬಾದ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಶನಿವಾರ, ಜನವರಿ 18, 2025
ಚನ್ನಣ್ಣ ವಾಲಿಕಾರ
ಕರ್ನಾಟಕದ ಪ್ರಖ್ಯಾತ ಬಂಡಾಯ ಸಾಹಿತಿಗಳಲ್ಲಿ ತುಂಬ ಹೆಸರು ಪಡೆದವರಲ್ಲಿ ಚೆನ್ನಣ್ಣ ವಾಲಿಕಾರರು ಒಬ್ಬರು. ಇವರು
ಗುಲಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕು ಶಂಕರವಾಡಿ ಗ್ರಾಮದಲ್ಲಿ ಹುಟ್ಟಿದರು.ತಂದೆ ಧೂಳಪ್ಪ ವಾಲೀಕಾರ, ತಾಯಿ ಸಾಬಮ್ಮ. ಇವರು ಕುಸ್ತಿ, ಹಾಡುಗಾರಿಕೆ, ಬಯಲಾಟದ ಒಕ್ಕಲುತನದ ಮನೆತನದವರು.
ಪ್ರಾಥಮಿಕ ಮತ್ತು
ಪ್ರೌಢಶಿಕ್ಷಣವನ್ನು ಶಹಬಾದನಲ್ಲಿ, ಕಲಬುರಗಿ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಸ್ನಾತಕೋತ್ತರ ಶಿಕ್ಷಣ ಪಡೆದರು. ಮತ್ತು ‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’ ಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ.
ವೃತ್ತಿ ಜೀವನ :
ಪದವಿಯ ನಂತರ ಉದ್ಯೋಗಕ್ಕೆ ಸೇರಿದ್ದು ಪ್ರೌಢಶಾಲಾ ಶಿಕ್ಷಕರಾಗಿ ೧೯೬೫-೬೯ರವರೆಗೆ ;
ರಾಯಚೂರಿನ ಕಾಲೇಜು ಉಪನ್ಯಾಸಕರಾಗಿ ೧೯೭೧-೭೮ರವರೆಗೆ,
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ೧೯೮೭-೨೦೦೩ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ 25-11-2019 ರಂದು ನಿಧನರಾದರು.
ಇವರು
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ,
ಅಕಾಡೆಮಿಕ್ ಕೌನ್ಸಿಲ್ ಸದಸ್ಯ
ಸೆನೆಟ್ ಸದಸ್ಯರಾಗಿ,
ಸಿಂಡಿಕೇಟ್ ಸದಸ್ಯರಾಗಿ,
ರಾಷ್ಟ್ರೀಯ ಸೇವಾ ಯೋಜನೆಯ ಸಮನ್ವಯಾಕಾರಿ
ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ಓದಿರಿ
ಚೆನ್ನಣ್ಣ ವಾಲೀಕಾರರು ಹಲವಾರು ಕೃತಿಗಳು ರಚಿಸಿದ್ದಾರೆ. ಅವುಗಳಲ್ಲಿ,
ಮರದ ಮೇಲಿನ ಗಾಳಿ,
ಕರಿತೆಲಿ ಮಾನವನ ಜೀಪದ,
ಹಾಡಕ್ಕಿ ಹಾಗು ಇತರ ಪದಗಳು,
ಬಂಡೆದ್ದ ದಲಿತರ ಬೀದಿ ಹಾಡುಗಳು,
ಧಿಕ್ಕಾರದ ಹಾಡುಗಳು,
ಪ್ಯಾಂಥರ್ ಪದ್ಯಗಳು,
ಕಥನ ಕವನಗಳು, ಎಂಬ ಕವನ ಸಂಕಲನಗಳು ಮತ್ತು
'ವ್ಯೋಮಾವ್ಯೋಮ' ಎಂಬ ಮಹಾಕಾವ್ಯ ರಚಿಸಿದ್ದಾರೆ.
ಮತ್ತು
‘ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ’ ಎಂಬುದು ಅವರ ಮಹಾ ಪ್ರಬಂಧವಾಗಿದೆ. ಅಷ್ಟೇಯಲ್ಲದೆ ಇವರು ಕೆಲ ಕಥಾಸಂಕಲನಗಳು ಪ್ರಕಟಿಸಿದ್ದು ಅವುಗಳಲ್ಲಿ,
ಕಪ್ಪು ಕಥೆಗಳು,
ಕುತ್ತದಲ್ಲಿ ಕುದ್ದವರ ಕಥೆಗಳು,
ಹೆಪ್ಪುಗಟ್ಟಿದ ಸಮುದ್ರ ಪ್ರಮುಖವಾಗಿವೆ. ಮತ್ತು
ಟೊಂಕದ ಕೆಳಗಿನ ಜನ,
ಅಗ್ನಿರಾಜ,
ತಲೆ ಹಾಕುವವರು,
ಕೂಸಿನ ಕಂಡಿರಾ,
ಅವಿವೇಕಿ ರಾಜನ ಕಥೆ,
ಜೋಗತಿ. ಇವು ಅವರ ಪ್ರಮುಖ ನಾಟಕ ಕೃತಿಗಳಾಗಿವೆ.
ಕಾದಂಬರಿ ಕ್ಷೇತ್ರದಲ್ಲಿಯು ಸಾಹಿತ್ಯ ರಚಿಸಿದ ಚನ್ನಣ್ಣನವರು:
ಒಂದು ಹೆಣ್ಣಿನ ಒಳಜಗತ್ತು,
ಕೋಟೆಬಾಗಿಲು,
ಹುಲಿಗೆಮ್ಮ,
ಗ್ರಾಮಭಾರತ,
ಬೆಳ್ಯ. ಎಂಬ ಕಾದಂಬರಿಗಳು ರಚಿಸಿದ್ದಾರೆ. ಇವರು
ಆರು ಡೆಪ್ಪಿನಾಟಗಳು.ಕೂಡ ರಚಿಸಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಹಲವಾರು
ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಅವುಗಳಲ್ಲಿ
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ,
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ.
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ.
ವಿಶ್ವೇಶ್ವರಯ್ಯ ತಾಂತ್ರಿಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
Labels:
ಶಹಾಬಾದ ತಾಲೂಕಿನ ಸಾಹಿತಿಗಳು
ಗುರುವಾರ, ಜನವರಿ 16, 2025
ವೀರಣ್ಣ ಕುಂಬಾರ
ಸಾಹಿತಿ ವೀರಣ್ಣ ಕುಂಬಾರ ರವರು ಕಲಬುರಗಿ ಜಿಲ್ಲೆ ಶಹಾಬಾದ ತಾಲ್ಲೂಕಿನ ಭಂಕೂರು ಗ್ರಾಮದ ಬಸಣ್ಣ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೨೫-೨-೧೯೫೪ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಇಂಜಿನಿಯರಿAಗ್ ಪದವೀಧರರಾದ ಇವರು ಕೆಲವರ್ಷ ಶಹಾಬಾದಿನ ಎ.ಬಿ.ಎಲ್. ಸಿಮೆಂಟ್ ಕಾರ್ಖಾನೆಯಲ್ಲಿ ಇಂಜಿನಿಯರಿAಗ್ ಸೇವೆ ಸಲ್ಲಿಸಿ ೧೯೯೮ರಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಸೋಲಾರ್ ಎನರ್ಜಿ ಪ್ರೊಜೆಕ್ಟ್ ನಿಮಿತ್ತವಾಗಿ ಬೀದರಿಗೆ ಆಗಮಿಸಿದ ಇವರು ಇಲ್ಲಿಯ ಕಲೆ ಸಾಹಿತ್ಯ ಬಸವ ಸಂಸ್ಕೃತಿ ಮೈಗೂಡಿಸಿಕೊಂಡು, `ಶರಣ ಕುಂಬಾರ ಗುಂಡಯ್ಯ, ಗುರುಪಾದ ಗಂಗೆ, ಶೀವರೇಖಾ, ಚೆನ್ನಯ್ಯನ ಮಗ ನಾನಯ್ಯ, ಸಾತ್ವಿಕ,' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಭಾಲ್ಕಿಯ ಶಾಂತಿ ಕಿರಣ (ದ್ವೈಮಾಸಿಕ) ಜ್ಯೋತಿ ಮುಟ್ಟಿದ ಬುತ್ತಿ, ಬಸವ ಬಳ್ಳಿ, ಇವು ಇವರ ಸಹ ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ. ಹಾಗೂ `ಹಿರೇಮಠ ಸಂಸ್ಥಾನ ಒಂದು ಅಧ್ಯಯನ, ಬೀದರ ಜಿಲ್ಲೆಯ ತಾಡೋಲೆ ಮತ್ತು ಹಸ್ತಪ್ರತಿ ಸಂಗ್ರಹ, ಬೀದರ ಜಿಲ್ಲೆಯ ತತ್ವ ಪದಕಾರರ ತತ್ವ ಪದಗಳು,’ ಎಂಬ ಕೃತಿಗಳು ಸಂಪಾದಿಸಿ ನೂರಾರು ಶರಣರ ವಚನಗಳಿಗೆ ವ್ಯಾಖ್ಯಾನಗಳು ಬರೆದಿದ್ದಾರೆ. ಸದ್ಯ ಇವರು ಭಾಲ್ಕಿಯ ನಿವಾಸಿಯಾಗಿದ್ದಾರೆ.
Labels:
ಶಹಾಬಾದ ತಾಲೂಕಿನ ಸಾಹಿತಿಗಳು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)