Translate
ಗುರುವಾರ, ಜನವರಿ 16, 2025
ಮಲ್ಲಿನಾಥ ಚಿಂಚೋಳಿ
ಸಾಹಿತಿ ಮಲ್ಲಿನಾಥ ಚಿಂಚೋಳಿ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚನ್ನೂರು ಗ್ರಾಮದ ಹಣಮಂತರಾವ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೨೫-೯-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ,ಇಡಿ. ಪದವಿಧರರಾದ ಇವರು ೧೯೯೫ರಿಂದ ಹುಮನಾಬಾದಿನ ರಾಮ ಮತ್ತು ರಾಜ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೮೬ರಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಚಂದ್ರ ಚನ್ನೂರು' ಎಂಬ ಕಾವ್ಯನಾಮದಲ್ಲಿ ಪತ್ರಿಕೆಗಳಲ್ಲಿ ಕವಿತೆಗಳು ಪ್ರಕಟಿಸಿ ಓದುಗರಿಂದ ಮೆಚ್ಚುಗೆಯು ಗಳಿಸಿದ್ದಾರೆ. ಆದರೆ ಬಹಳ ವರ್ಷಗಳಿಂದ ಪುಸ್ತಕ ಪ್ರಕಟಿಸದೆ ಉಳಿದ ಇವರು ೨೦೧೮ರಲ್ಲಿ `ಮುಂಜಾವಿನ ಮಲ್ಲಿಗೆ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕತೆ, ಕವನ, ಲೇಖನಗಳು ಸಂಯುಕ್ತ ಕರ್ನಾಟಕ, ಕರ್ಮವೀರ, ಮಯೂರ, ಗ್ರೀನೊಬಲ್ಸ್, ಕನ್ನಡ ನಾಡು, ಕೆಸರಿ ಘರ್ಜನೆ, ಸತ್ಯಕಾಮ ಮೊದಲಾದವುಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ ಮಟ್ಟದ ಕಮ್ಮಟಗಳಲ್ಲಿ ಪಾಲ್ಗೊಂಡು ಅನೇಕ ಉಪನ್ಯಾಸವು ನೀಡಿದ್ದಾರೆ. ಸದ್ಯ ಇವರು ಹುಮನಾಬಾದಿನ ನಿವಾಸಿಯಾಗಿದ್ದು, ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸುಮಾರು ಇಲ್ಲಿಯವರೆಗೆ ೧೦೦೦ಕ್ಕಿಂತ ಹೆಚ್ಚು ಕವನಗಳು, ೧೫. ಕತೆಗಳು, ಹಲವಾರು ಲೇಖನ, ಬಿಡಿ ಬರಹಗಳು ಬರೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ