ಪುಟಗಳು

Translate

ಗುರುವಾರ, ಜನವರಿ 16, 2025

ಮಾನಶೆಟ್ಟಿ ಬೆಳಕೇರಿ

ಹಿರಿಯ ಮಕ್ಕಳ ಸಾಹಿತಿ ಮಾನಶೆಟ್ಟಿ ಬೆಳಕೇರಿ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾ ಇದಲಾಯಿ ಎಂಬ ಗ್ರಾಮದ ಸಿದ್ದಪ್ಪ ಮತ್ತು ಭೋಗಮ್ಮ ದಂಪತಿಗಳಿಗೆ ದಿನಾಂಕ ೧೨-೨-೧೯೪೯ರಲ್ಲಿ ಜನಿಸಿದ್ದಾರೆ. ಎಂ.ಎ.ಎಂ.ಎಡ್ ಪದವಿಧರರಾದ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಆಸಕ್ತರಾಗಿ ೧೯೬೫ರಲ್ಲಿ `ಹೂಗೊಂಚಲು' ಮತ್ತು ೧೯೮೪ರಲ್ಲಿ `ಮತ್ತೆ ಬಂತು ವಸಂತ' (ಮಕ್ಕಳ ಕವನ ಸಂಕಲನಗಳು) ೨೦೧೫ರಲ್ಲಿ `ಕರ್ನಾಟಕ ವಿಮೋಚನೆ' (ಲೇಖನ ) ೨೦೧೬ರಲ್ಲಿ `ಬೆಳಕೇ ರಿ' (ಚುಟುಕುಗಳ ಸಂಕಲನ) ೨೦೧೭ರಲ್ಲಿ `ಕಲ್ಯಾಣ ಕರ್ನಾಟಕ ಸಮಗ್ರ ಇತಿಹಾಸ' ಮತ್ತು `ಕನ್ನಡ ಕುಲಗುರು ಬಸಪ್ಪ ಕರಕಾಳೆ' ಹಾಗೂ ೨೦೧೯ರಲ್ಲಿ 'ಹನುಮಾಯಣ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಕಾವ್ಯ, ಪದ್ಯ, ಕಥನ ಕವನ, ಅಕರಾದಿ ಪಂದ್ಯ, ವಿಡಂಬನೆ, ಹಾಸ್ಯ, ಮೊದಲಾದ ಸೃಜನಶೀಲ ಬರಹಗಳನ್ನು ಬರೆದಿದ್ದಾರೆ. ಅವು ನಾಡಿನಾದ್ಯಂತ ಹಲವಾರು ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ,ಪ್ರಸಾರವಾಗಿವೆ. ಮತ್ತು ಇವರು ನಟ ಅನಂತನಾಗ ನಟಿಸಿದ `ಬರ' ಚಲನ ಚಿತ್ರದಲ್ಲಿ ನಟಿಸಿ ಕಲಾವಿದರಾಗಿಯು ಗುರ್ತಿಸಿಕೊಂಡಿದ್ದಾರೆ. ಆದ್ದರಿಂದ ಇವರ ಕಲೆ, ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ೧೯೮೪ರಲ್ಲಿ ಕಲಬುರಗಿಯಿಂದ `ಯುವ ಮಕ್ಕಳ ಸಾಹಿತಿ' ಎಂಬ ಪ್ರಶಸ್ತಿ, ೨೦೦೬ರಲ್ಲಿ ಡಾ.ಅಬ್ದುಲ್ ಕಲಾಮ್ ವಿಜನ್ ವತಿಯಿಂದ ಕನ್ನಡ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ೨೦೦೬ರಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಕವನವು ವಾಚನ ಮಾಡಿದರು. .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ